ರವಿ ಬೆಳಗೆರೆ

ರವಿ ಬೆಳಗೆರೆ (೧೫ ಮಾರ್ಚ್ ೧೯೫೮ - ೧೩ ನವೆಂಬರ್ ೨೦೨೦) ಕನ್ನಡದ ಪತ್ರಕರ್ತರು ಹಾಗೂ ಪತ್ರಿಕೋದ್ಯಮಿಯಾಗಿದ್ದರು. ಹಾಯ್ ಬೆಂಗಳೂರ್ ಎಂಬ ವಾರಪತ್ರಿಕೆ ಹಾಗೂ 'ಓ ಮನಸೇ' ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿದ್ದರು. ಅವರು ಕನ್ನಡ ಸಾಹಿತಿ, ಚಿತ್ರಕಥೆ ಬರಹಗಾರ, ಈ-ಟಿವಿ ಕನ್ನಡ ವಾಹಿನಿಯ ಜನಪ್ರಿಯ ಕ್ರೈಂ ಡೈರಿ ಕಾರ್ಯಕ್ರಮದ ನಿರೂಪಕರಾಗಿ ಹಾಗೂ ಜನಶ್ರೀ  ವಾಹಿನಿಯ ಮುಖ್ಯಸ್ಥರಾಗಿ, ಕಾರ್ಯಕ್ರಮಗಳ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುವ ಮತ್ತು ಭಾಷಾಂತರಿಸಿರುವ ರವಿ ಬೆಳಗೆರೆ, ಭಾವನಾ ಪ್ರಕಾಶನ, ಭಾವನಾ ಆಡಿಯೋ ರೀಚ್ ಮತ್ತು ಪ್ರಾರ್ಥನಾ ಶಾಲೆಯ ಸಂಸ್ಥಾಪಕ. ರವಿ 'ಹಾಯ್ ಬೆಂಗಳೂರ್' ಪತ್ರಿಕೆ ಪ್ರಾರಂಭಿಸುವ ಮುನ್ನ ಕರ್ಮವೀರ, ಸಂಯುಕ್ತ ಕರ್ನಾಟಕ  ಮತ್ತು ಕಸ್ತೂರಿ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು.



ರವಿ ಬೆಳಗೆರೆ
ಜನನ :೧೫ ಮಾರ್ಚ್ ೧೯೫೮ ಬಳ್ಳಾರಿ

ಮರಣ:೧೩ ನವೆಂಬರ್ ೨೦೨೦  (62 ವರ್ಷ)ಬೆಂಗಳೂರು, ಕರ್ನಾಟಕ

ವೃತ್ತಿ
ಪತ್ರಿಕೋದ್ಯಮಿ, ಬರಹಗಾರ, ಕಾದಂಬರಿಕಾರ, ಪತ್ರಿಕೆ ಸಂಪಾದಕ, ನಟ ಮತ್ತು ಟಿವಿ ಕಾರ್ಯಕ್ರಮ ನಿರೂಪಕ.

ಪ್ರಕಾರ/ಶೈಲಿ
Fiction, Non Fiction

ಪ್ರಮುಖ ಕೆಲಸ(ಗಳು)
ಹಿಮಾಲಯನ್ ಬ್ಲಂಡರ್, ಭೀಮಾ ತೀರದ ಹಂತಕರು, ನೀ ಹಿಂಗ ನೋಡಬ್ಯಾಡ ನನ್ನ, ಡಿ ಕಂಪನಿ, ಇಂದಿರೆಯ ಮಗ ಸಂಜಯ, ಕಲ್ಪನಾ ವಿಲಾಸ

ಜನನ–ಶಿಕ್ಷಣ–ವೃತ್ತಿಜೀವನ

ರವಿ ಬೆಳಗೆರೆ ಹುಟ್ಟಿದ್ದು 15 ಮಾರ್ಚ್ 1958 ಬಳ್ಳಾರಿಯಲ್ಲಿ. ಶಾಲಾಶಿಕ್ಷಣ ಬಳ್ಳಾರಿಯಲ್ಲಿ ಮುಗಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಮಾಡಿದರು. ಅವರು 1995ರಲ್ಲಿ ಹಾಯ್ ಬೆಂಗಳೂರ್! ಟ್ಯಾಬ್ಲಾಯ್ಡ್‌ನ್ನು ಆರಂಭಿಸಿದ್ದರು. ಅದು ಜನಪ್ರಿಯವಾಗಿತ್ತು.



ಕೃತಿಗಳು

ಕಥಾ ಸಂಕಲನ

ದಾರಿ, 1980
ಪಾ.ವೆಂ. ಹೇಳಿದ ಕಥೆ, 1995
ಒಟ್ಟಾರೆ ಕಥೆಗಳು, 2001

ಕಾದಂಬರಿ

ಗೋಲಿಬಾರ್, 1983
ಅರ್ತಿ, 1990
ಮಾಂಡೋವಿ, ಸೆಪ್ಟಂಬರ್ 1996
ಮಾಟಗಾತಿ, 1998
ಒಮರ್ಟಾ, ಜನವರಿ 1999
ಸರ್ಪ ಸಂಬಂಧ, ಜೂನ್ 2000
ಹೇಳಿ ಹೋಗು ಕಾರಣ, ಸೆಪ್ಟಂಬರ್ 2003
ನೀ ಹಿಂಗ ನೋಡಬ್ಯಾಡ ನನ್ನ, ಸೆಪ್ಟಂಬರ್ 2003
ಗಾಡ್‌ಫಾದರ್ , ಮಾರ್ಚ್ 2005
ಕಾಮರಾಜ ಮಾರ್ಗ, ನವೆಂಬರ್ 2010
ಹಿಮಾಗ್ನಿ, ೨೦೧೨

ಅನುವಾದ

ವಿವಾಹ, 1983
ನಕ್ಷತ್ರ ಜಾರಿದಾಗ, 1984
ಹಿಮಾಲಯನ್ ಬ್ಲಂಡರ್, ಸೆಪ್ಟಂಬರ್1999
ಕಂಪನಿ ಆಫ್ ವಿಮೆನ್, ಜನವರಿ 2000
ಟೈಂಪಾಸ್, ಜನವರಿ 2001
ರಾಜ ರಹಸ್ಯ, ನವೆಂಬರ್ 2002
ಹಂತಕಿ ಐ ಲವ್ ಯೂ, ಜನವರಿ 2007
ದಂಗೆಯ ದಿನಗಳು, ಮಾರ್ಚ್ 2008

ದೇಶ-ಇತಿಹಾಸ-ಯುದ್ಧ

ಕಾರ್ಗಿಲ್‌ನಲ್ಲಿ ಹದಿನೇಳು ದಿನ, ಸೆಪ್ಟಂಬರ್ 1999
ಬ್ಲ್ಯಾಕ್ ಫ್ರೈಡೆ (ಅನುವಾದ) ಆಗಸ್ಟ್ 2005
ರೇಷ್ಮೆ ರುಮಾಲು (ಅನುವಾದ) ಆಗಸ್ಟ್ 2007
ಇಂದಿರೆಯ ಮಗ ಸಂಜಯ, ಸೆಪ್ಟಂಬರ್ 2002
ಗಾಂಧೀ ಹತ್ಯೆ ಮತ್ತು ಗೋಡ್ಸೆ, ಸೆಪ್ಟಂಬರ್ 2003
ಡಯಾನಾ, ಜನವರಿ 2007
ನೀನಾ ಪಾಕಿಸ್ತಾನ
ಅವನೊಬ್ಬನಿದ್ದ ಗೋಡ್ಸೆ
ಮೇಜರ್ ಸಂದೀಪ್ ಹತ್ಯೆ
ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು
ಮುಸ್ಲಿಂ

ಜೀವನ ಕಥನ

ಪ್ಯಾಸಾ, 1991
ಪಾಪದ ಹೂವು ಫೂಲನ್, ಆಗಸ್ಟ್2001
ಸಂಜಯ, 2000
ಚಲಂ (ಅನುವಾದ) ಮಾರ್ಚ್ 2008

ಕ್ರೈಂ
ಹತ್ಯಾಕಥನ

ರಾಜೀವ್ ಹತ್ಯೆ ಏಕಾಯಿತು? ಹೇಗಾಯಿತು? 1991
ಮೈಸೂರಿನ ಸೀರಿಯಲ್ ಕಿಲ್ಲರ್ ರವೀಂದ್ರ ಪ್ರಸಾದ್, 1998
ರಂಗವಿಲಾಸ್ ಬಂಗಲೆಯ ಕೊಲೆಗಳು
ಬಾಬಾ ಬೆಡ್‌ರೂಂ ಹತ್ಯಾಕಾಂಡ (ತನಿಖಾ ವರದಿ) ಜನವರಿ 2007
ಪ್ರಮೋದ್ ಮಹಾಜನ್ ಹತ್ಯೆ (ಅನುವಾದ) ಅಕ್ಟೋಬರ್ 2012

ಭೂಗತ ಇತಿಹಾಸ

ಪಾಪಿಗಳ ಲೋಕದಲ್ಲಿ ಭಾಗ -1, 1995
ಪಾಪಿಗಳ ಲೋಕದಲ್ಲಿ ಭಾಗ 2, ಸೆಪ್ಟಂಬರ್ 1997
ಭೀಮಾ ತೀರದ ಹಂತಕರು, ಮೇ 2001
ಪಾಪಿಗಳ ಲೋಕದಲ್ಲಿ, 2005
ಡಿ ಕಂಪನಿ, 2008

ಬದುಕು
ಖಾಸ್‌ಬಾತ್ 96, 1997
ಖಾಸ್‌ಬಾತ್ 97, ಸೆಪ್ಟಂಬರ್ 1997
ಖಾಸ್‌ಬಾತ್ 98, ಸೆಪ್ಟಂಬರ್ 1998
ಖಾಸ್‌ಬಾತ್ 99, ಅಕ್ಟೋಬರ್ 2003
ಖಾಸ್‌ಬಾತ್ 2000, ಅಕ್ಟೋಬರ್ 2003
ಖಾಸ್‌ಬಾತ್ 2001, ಜನವರಿ 2007
ಖಾಸ್‌ಬಾತ್ 2002, ಜನವರಿ 2008
ಖಾಸ್‌ಬಾತ್ 2003

ಅಂಕಣ ಬರೆಹಗಳ ಸಂಗ್ರಹ

ಜೀವನ ಪಾಠ

ಬಾಟಮ್ ಐಟಮ್ ಭಾಗ 1, ಫೆಬ್ರವರಿ2002
ಬಾಟಮ್ ಐಟಮ್ 2, ಅಕ್ಟೋಬರ್2003
ಬಾಟಮ್ ಐಟಮ್ ಭಾಗ 3, ಡಿಸೆಂಬರ್ 2006
ಬಾಟಂ ಐಟಮ್ 4
ಬಾಟಂ ಐಟಮ್ 5

ಪ್ರೀತಿ ಪತ್ರಗಳು

ಲವಲವಿಕೆ -1, ಡಿಸೆಂಬರ್ 1998
ಲವಲವಿಕೆ -2, ಸೆಪ್ಟಂಬರ್ 2004
ಲವಲವಿಕೆ -3
ಲವಲವಿಕೆ -4

ಕವನ ಸಂಕಲನ

ಅಗ್ನಿಕಾವ್ಯ, 1983

ಇತರೆ

ಕೇಳಿ, ಜೂನ್ 2001
ಮನಸೇ ಆಡಿಯೋ ಸಿಡಿ ಜನವರಿ 2007
ಫಸ್ಟ್ ಹಾಫ್
ಅಮ್ಮ ಸಿಕ್ಕಿದ್ಲು, ೨೦೧೨
ಇದು ಜೀವ: ಇದುವೇ ಜೀವನ, ೨೦೧೨
ಏನಾಯ್ತು ಮಗಳೇ, ಡಿಸೆಂಬರ್ 2013

ಪ್ರಶಸ್ತಿಗಳು

1984 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿವಾಹ (ಸೃಜನೇತರ)

1990 ಮಾಸ್ತಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವಂಧ್ಯ (ಕತೆ)

1997 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಾ.ವೆಂ. ಹೇಳಿದ ಕತೆ (ಸಣ್ಣ ಕತೆ)

2004 ಶಿವರಾಮ ಕಾರಂತ ಪುರಸ್ಕಾರ ನೀ ಹಿಂಗ ನೋಡಬ್ಯಾಡ ನನ್ನ(ಕಾದಂಬರಿ)

2005 ಕಂಪ್ಯೂಟರ್ ಎಕ್ಸಲೆನ್ಸಿ ಅವಾರ್ಡ್ ಪ್ರಾರ್ಥನಾ ಶಾಲೆ (ಕೇಂದ್ರ ಸರ್ಕಾರ)

2008 ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಜೀವಮಾನದ ಸಾಧನೆ

2011 ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರ್ಕಾರ

ಮರಣ

ಬೆಳಗೆರೆ ಅವರು ಬೆಂಗಳೂರಿನಲ್ಲಿ, ೧೩ ನವೆಂಬರ್ ೨೦೨೦ರ ಬೆಳಗಿನ ಜಾವ ೨:೩೦ರಲ್ಲಿ ಹೃದಯಾಘಾತದಿಂದ ಮರಣ ಹೊಂದಿದರು. ಅವರಿಗೆ ೬೨ ವರ್ಷ ವಯಸ್ಸಾಗಿತ್ತು

Post a Comment

0 Comments