ಭಾರತದ ಭೂಗೋಳ

ಭೂಗೋಳ
ಅಧ್ಯಾಯ 1 ಭಾರತ ನಮ್ಮ ಭೂಮಿ (GEO)

ಮುಖ್ಯಾಂಶಗಳು:
• ಇಂಡಿಯಾ ಎಂಬ ಹೆಸರು ಸಿಂದೂ ನದಿಯಿಂದ ಬಳಕೆಗೆ   ಬಂದಿದೆ.
• ಭಾರತವು ಒಟ್ಟು 32,87,263 ಚದರ ಕಿ.ಮೀ. ವಿಸ್ತಾರವಾಗಿದೆ.
• ಭಾರತದ ಮಧ್ಯಭಾಗದಲ್ಲಿ 23 ಳಿº ಉತ್ತರ ಅಕ್ಷಾಂಶ ಹಾಯ್ದು ಹೋಗುತ್ತದೆ.
• ಭಾರತದ ದಕ್ಷಿಣ ತುದಿಯಲ್ಲಿರುವ ದೇಶ ಶ್ರೀಲಂಕಾ
• ಭಾರತವು ಹೊಂದಿರುವ ಉದ್ದವಾದ ಕರಾವಳಿಯು 6100 ಕಿ.ಮೀ. ಆಗಿದೆ.
• ಭಾರತವು ಏಷ್ಯಾ ಖಂಡದ ದಕ್ಷಿಣ ಭಾಗದಲ್ಲಿದೆ.
• ಭಾರತವು ಭೂಮಿಯ ಉತ್ತರ ಗೋಳಾರ್ಧದಲ್ಲಿದೆ.
• ಭಾರತದ ಭೂರಾಶಿಯ ದಕ್ಷಿಣ ತುದಿ ಇಂದಿರಾ ಪಾಯಿಂಟ್
• ಭಾರತದ ದಕ್ಷಿಣದ ಭಾಗದ ಭೂಶಿರದ ಹೆಸರು ಕನ್ಯಾಕುಮಾರಿ
• ಇಂದಿರಾಪಾಯಿಂಟ್ ಇರುವ ದ್ವೀಪ ಗ್ರೇಟ್ ನಿಕೋಬಾರ್ ದ್ವೀಪ
• ಭಾರತವು ಪ್ರಪಂಚದ 7 ನೇ ದೊಡ್ಡ ದೇಶವಾಗಿದೆ.
• ಭಾರತದಲ್ಲಿ ಒಟ್ಟು 29 ರಾಜ್ಯಗಳು & 6 ಕೇಂದ್ರಾಡಳಿತ ಪ್ರದೇಶಗಳಿವೆ.
• 2011 ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆ 121 ಕೋಟಿ.
• ಭಾರತವು 8º4′ ಉತ್ತರ ಅಕ್ಷಾಂಶದಿಂದ 37º6ꞌ ಉತ್ತರ ಅಕ್ಷಾಂಶದವರೆಗೆ ಹರಡಿದೆ.
• ಭಾರತವು ದಕ್ಷಿಣದ ಕನ್ಯಾಕುಮಾರಿ ಭೂಶಿರದಿಂದ ಉತ್ತರದ ಕಾಶ್ಮೀರದವರೆಗೆ 3214 ಕಿ.ಮೀ.ಉದ್ದವಾಗಿದೆ. (ಭಾರತದ ದಕ್ಷೀಣೋತ್ತರ ಉದ್ದ)
• ದ್ವೀಪಗಳನ್ನು ಪರಿಗಣಿಸಿದಾಗ ಗ್ರೇಟ್ ನಿಕೋಬಾರ್ ದ್ವೀಪದ ಇಂದಿರಾ ಪಾಯಿಂಟ್ ಭಾರತದ ಅತ್ಯಂತ ದಕ್ಷಿಣ ತುದಿಯಾಗಿದೆ.
• ಭಾರತವು 68º7ꞌ ಪೂರ್ವ ರೇಖಾಂಶದಿಂದ 97º25ꞌ ಪೂರ್ವ ರೇಖಾಂಶದವರೆಗೆ ಹಬ್ಬಿದೆ.
• ಭಾರತವು ಪೂರ್ವ-ಪಶ್ಚಿಮವಾಗಿ 2933 ಕಿ.ಮೀ.ಅಗಲವಾಗಿದೆ.
• 82ಳಿº ರೇಖಾಂಶವನ್ನಾಧರಿಸಿ ಭಾರತದ ಪ್ರಮಾಣ ವೇಳೆಯನ್ನು ನಿಗದಿಪಡಿಸಲಾಗಿದೆ.
• ಭಾರತದ ಕಾಲಮಾನವು ಗ್ರೀನವಿಚ್ ಕಾಲಮಾನಕ್ಕಿಂತ 5:30 ಗಂಟೆ ಮುಂದೆ ಇರುವುದು.
• ಭಾರತದ ಭೂಗಡಿಯ ಉದ್ದ 15200 ಕಿ.ಮೀ.ಗಳು.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
1. ಭಾರತವನ್ನು ಉಪಖಂಡ ಎಂದು ಕರೆಯಲು ಕಾರಣಗಳೇನು?
ಭಾರತದಲ್ಲಿನ ವಿವಿಧ ರೀತಿಯ ಮೇಲ್ಮೈ ಲಕ್ಷಣಗಳು, ವಾಯುಗುಣ, ಸ್ವಾಭಾವಿಕ ಸಸ್ಯವರ್ಗಗಳು ಹಾಗೂ ಜನರಲ್ಲಿನ ವೈವಿದ್ಯತೆಗಳನ್ನು ಗಮನಿಸಿದಾಗ ಇದನ್ನು ಒಂದು ಉಪಖಂಡ ಎಂದು ಕರೆಯಬಹುದಾಗಿದೆ.

2. ಭಾರತದ ನೆರಹೊರೆ ರಾಷ್ಟ್ರಗಳಾವವು?
• ಭಾರತದ ವಾಯುವ್ಯದಲ್ಲಿ ಪಾಕಿಸ್ತಾನ & ಅಫಘಾನಿಸ್ತಾನ, ಉತ್ತರದಲ್ಲಿ ಚೀನಾ, ನೇಪಾಳ &
• ಭೂತಾನ್, ಪೂರ್ವದಲ್ಲಿ ಮಯನ್ಮಾರ್(ಬರ್ಮಾ) ಹಾಗೂ ಬಾಂಗ್ಲಾದೇಶ, ದಕ್ಷಿಣದಲ್ಲಿ ಶ್ರೀಲಂಕಾ ಹಾಗೂ
• ನೈರುತ್ಯದಲ್ಲಿರುವ ಮಾಲ್ದೀವ್ಸ್ ದ್ವೀಪಗಳು ಭಾರತದ ನೆರೆಯ ರಾಷ್ಟ್ರಳಾಗಿವೆ.

ಅಧ್ಯಾಯ 2] ಭಾರತದ ಪ್ರಾಕೃತಿಕ ಲಕ್ಷಣಗಳು (GEO)
ಭಾರತದ ಪ್ರಾಕೃತಿಕ ವಿಭಾಗಗಳು
1. ಹಿನ್ನಲೆ.
2. ಭಾರತದ ಪ್ರಾಕೃತಿಕ ವಿಭಾಗಗಳು:
3.1 ಉತ್ತರದ ಪರ್ವತಗಳು:

3.2  ಉತ್ತರದ ಮೈದಾನಗಳು:

3.3  ಪರ್ಯಾಯ ಪ್ರಸ್ಥ ಭೂಮಿ:

3.3  ಕರಾವಳಿ ಪ್ರದೇಶಗಳು ಮತ್ತು ದ್ವೀಪಗಳು:
ಮುಖ್ಯಾಂಶಗಳು:
• ಭಾರತದ ಭೂಸ್ವರೂಪವನ್ನು 4 ಪ್ರಧಾನ ವಿಭಾಗಗಳಾಗಿ ವಿಂಗಡಿಸಲಾಗಿದೆ.
• ಮಹಾ ಹಿಮಾಲಯವನ್ನು ಹಿಮಾದ್ರಿ ಎಂದು ಕರೆಯುವರು.
• ಪ್ರಪಂಚದಲ್ಲಿಯೇ ಮೌಂಟ್ ಎವರೆಸ್ಟ (8848 ಮೀ) ಅತ್ಯುನ್ನತ ಶಿಖರವಾಗಿದೆ.
• ಉತ್ತರ ಭಾರತದ ಮೈದಾನವು ಮೆಕ್ಕಲು ಮಣ್ಣಿನಿಂದ ನಿರ್ಮಾಣವಾಗಿದೆ.
• ಪಶ್ಚಿಮ ಘಟ್ಟಗಳನ್ನು ಮಹಾರಾಷ್ಟ್ರದಲ್ಲಿ ಹಾಗೂ ಕರ್ನಾಟಕದಲ್ಲಿ ಸಹ್ಯಾದ್ರಿ ಎಂದು ಕರೆಯುವರು.
• ಹಿಮಾಲಯ ಪಾದ ಬೆಟ್ಟಗಳಿಗಿರುವ ಮತ್ತೊಂದು ಹೆಸರು ಶಿವಾಲಿಕ್ ಬೆಟ್ಟಗಳು.
• ಹಿಮಾಲಯ ಪರ್ವತ ಶ್ರೇಣಿಯು ಪಾಮೀರ ಗ್ರಂಥಿಯಿಂದ ಪ್ರಾರಂಭವಾಗಿ ಪೂರ್ವದಲಿ ್ಲಅರುಣಾಚಲ ಪ್ರದೇಶದವರೆಗೆ ಸುಮಾರು 2500 ಕಿ.ಮೀ.ಉದ್ದವಾಗಿ ಹಬ್ಬಿದೆ.
• ಹಿಮಾಲಯ ಪರ್ವತಗಳಲ್ಲಿ ಅತಿ ಎತ್ತರವಾದ ಹಾಗೂ ಮೊದಲು ನಿರ್ಮಿತಗೊಂಡಿರುವ ಸರಣಿ ಹಿಮಾದ್ರಿ.
• ಪ್ರಪಂಚದಲ್ಲಿಯೇ ಅತ್ಯುನ್ನತ ಶಿಖರವಾದ ಮೌಂಟ್ ಎವರೆಸ್ಟ ನೇಪಾಳ & ಟಿಬೇಟ್ ಮಧ್ಯದಲ್ಲಿದೆ.
• ಗಂಗಾನದಿಯ ಉಗಮ ಸ್ಥಾನ ಗಂಗೋತ್ರಿ ಹಿಮನದಿ.
• ಭಾರತದ ಅತ್ಯುನ್ನತವಾದ ಶಿಖರ -  ಕೆ2 ಅಥವಾ ಮೌಂಟ ಗಾಡ್ವಿನ್ ಅಸ್ಟಿನ್
• ಉತ್ತರ ಮಹಾ ಮೈದಾನವನ್ನು ಸತ್ಲಜ್‍ಗಂಗಾ ಮೈದಾನವೆಂತಲೂ ಕರೆಯುವರು.
• ಭಾರತದ ಭೂಸ್ವರೂಪ ವಿಭಾಗಗಳಲ್ಲಿ ಅತಿ ದೊಡ್ಡದು ಪರ್ಯಾಯ ಪ್ರಸ್ಥಭೂಮಿ.
• ಭಾರತದ ಅತಿ ಪುರಾತನ ಭೂಭಾಗ ಪರ್ಯಾಯ ಪ್ರಸ್ಥಭೂಮಿ.
• ಪರ್ಯಾಯ ಪ್ರಸ್ಥಭೂಮಿಯ ಒಟ್ಟು ವಿಸ್ತೀರ್ಣ 16 ಲಕ್ಷ ಚ.ಕಿ.ಮೀ.
• 16. ಅಣ್ಣಾಮಲೈ ಸರಣಿಯ ಅನೈಮುಡಿ ಶಿಖರ ದಕ್ಷಿಣ ಭಾರತದಲ್ಲಿಯೇ ಅತ್ಯುನ್ನತ ಪ್ರದೇಶವಾಗಿದೆ.
• ಪೂರ್ವ ಘಟ್ಟಗಳು ಹಾಗೂ ಪಶ್ಚಿಮ ಘಟ್ಟಗಳು ನೀಲಗಿರಿ ಬೆಟ್ಟಗಳಲ್ಲಿ ಸಂಧಿಸುತ್ತವೆ.
• ಪಶ್ಚಿಮ ಕರಾವಳಿಯನ್ನು ಕರ್ನಾಟಕದಲ್ಲಿ ಕೊಂಕಣ ತೀರ ಎಂದು ಕರೆಯುವರು.
• ಒರಿಸ್ಸಾದ ಚಿಲ್ಕಾ ಹಾಗೂ ತಮಿಳುನಾಡಿನ ಪುಲಿಕಾಟ್ ಸರೋವರಗಳು ಉಪ್ಪುನೀರಿನ ಸರೋವರಗಳಾಗಿವೆ.
• ಭಾರತಕ್ಕೆ ಸೇರಿದ 247 ದ್ವೀಪಗಳಿವೆ. ಇವುಗಳಲ್ಲಿ 204 ದ್ವೀಪಗಳು ಬಂಗಾಳ ಕೊಲ್ಲಿಯಲ್ಲಿ ಮತ್ತು 43 ದ್ವೀಪಗಳು ಅರಬ್ಬಿ ಸಮುದ್ರದಲ್ಲಿವೆ.
• ಅಂಡಮಾನ್ & ನಿಕೋಬಾರ್ ದ್ವೀಪಗಳು ಗಟ್ಟಿಯಾದ ಜ್ವಾಲಾಮುಖಿ ನಿರ್ಮಿತ ಶಿಲೆಗಳಿಂದ ಕೂಡಿವೆ.
• ಲಕ್ಷದ್ವೀಪಗಳು ಹವಳಗಳಿಂದ ನಿರ್ಮಿತವಾಗಿವೆ.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಸಿವಾಲಿಕ್ ಶ್ರೇಣಿಯನ್ನು ಕುರಿತು ಬರೆಯಿರಿ.
ಶಿವಾಲಿಕ್ ಶ್ರೇಣಿಯು ಅತಿ ಕಡಿಮೆ ಎತ್ತರವನ್ನು ಹೊಂದಿದೆ. ಇದನ್ನು ಹಿಮಾಲಯದ ಪಾದಬೆಟ್ಟಗಳೆಂದು ಕರೆಯುವರು. ಇಲ್ಲಿ ಕಿರಿದಾದ ಮೈದಾನಗಳಿವೆ. ಇವುಗಳಿಗೆ ಡೂನ್‍ಗಳೆಂದು ಕರೆಯುವರು.
ಉದಾ : ಡೆಹರಾಡೂನ್. ಇವು ಸಮುದ್ರ ಮಟ್ಟದಿಂದ 600 ರಿಂದ 1500 ಮೀ. ಎತ್ತರವಾಗಿವೆ.

2. ಭಾರತದ ಭೂಸ್ವರೂಪ ವಿಭಾಗಗಳಲ್ಲಿ ಯಾವುದು ಇತ್ತೀಚಿನ ಅವಧಿಯಲ್ಲಿ ನಿರ್ಮಿತವಾಗಿದೆ?
ಉತ್ತರದ ಮಹಾಮೈದಾನ ಭಾರತದ ¨Àೂs ಸ್ವರೂಪ ವಿಭಾಗಗಳಲ್ಲಿ ಇತ್ತೀಚಿನ ಅವಧಿಯಲ್ಲಿ ನಿರ್ಮಿತವಾಗಿದೆ.

3. ಹಿಮಾಲಯ ಪರ್ವತಗಳ ಮೂರು ಶ್ರೇಣಿಗಳನ್ನು ತಿಳಿಸಿ.
ಎತ್ತರಕ್ಕನುಗುಣವಾಗಿ ಹಿಮಾಲಯ ಪರ್ವತಗಳನ್ನು ಮೂರು ಶ್ರೇಣಿಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ
1. ಶಿವಾಲಿಕ್ ಶ್ರೇಣಿ 2. ಹಿಮಾಚಲ ( ಮಧ್ಯ ಹಿಮಾಲಯ )
   3. ಮಹಾ ಹಿಮಾಲಯ ( ಹಿಮಾದ್ರಿ ).

4. ಹಿಮಾಲಯ ಪರ್ವತದಿಂದಾಗುವ

ಪ್ರಯೋಜನಗಳೇನು?
• ಭಾರತಕ್ಕೆ ರಕ್ಷಣೆಯನ್ನು ಒದಗಿಸುತ್ತವೆ.
• ಮಧ್ಯೆ ಏಷ್ಯಾದಿಂದ ಬೀಸುವ ಶೀತಗಾಳಿಯನ್ನು ತಡೆಹಿಡಿಯುತ್ತವೆ.
• ನದಿಗಳ ಉಗಮ ಪ್ರದೇಶವಾಗಿವೆ.
• ಜಲವಿದುಚ್ಛಕ್ತಿ ಉತ್ಪಾದನೆಗೆ ಅನುಕೂಲವಾಗಿವೆ.
• ವೈವಿದ್ಯಮಯ ಸಸ್ಯ & ಪ್ರಾಣಿ ಸಂಕುಲಗಳಿಗೆ ಆಶ್ರಯ ತಾಣವಾಗಿವೆ.
• ಅಪಾರ ಪ್ರಮಾಣದ ಖನಿಜ ಸಂಪನ್ಮೂಲಗಳನ್ನು ಒಳಗೊಂಡಿವೆ.

5. ಡೂನ್‍ಗಳೆಂದರೇನು?
ಶಿವಾಲಿಕ್ ಶ್ರೇಣಿಯಲ್ಲಿರುವ ಸಮತಟ್ಟಾದ ಕಿರಿದಾದ ಮೈದಾನಗಳಿಗೆ ಡೂನ್‍ಗಳೆಂದು ಕರೆಯುತ್ತಾರೆ.

6. ಪರ್ಯಾಯ ಪ್ರಸ್ಥಭೂಮಿಯು ಹೊಂದಿರುವ ವ್ಯಾಪ್ತಿಯನ್ನು ವಿವರಿಸಿ.
1. ಪರ್ಯಾಯ ಪ್ರಸ್ಥಭೂಮಿಯು ಉತ್ತರದಲ್ಲಿ ಸತ್ಲಜ್ ಗಂಗಾ ಮೈದಾನದಿಂದ ದಕ್ಷಿಣದಲ್ಲಿ ಹಿಂದುಮಹಾಸಾಗರದಲ್ಲಿ ಚಾಚಿಕೊಂಡಿದೆ.
2. ಪಶ್ಚಿಮದಲ್ಲಿ ಪಶ್ಚಿಮ ಘಟ್ಟಗಳಿಂದ ಪೂರ್ವದಲ್ಲಿ ಪೂರ್ವ ಘಟ್ಟಗಳಿಂದ ಕೂಡಿಕೊಂಡಿದೆ.
3. ಈ ಪ್ರಸ್ಥಭೂಮಿಯು ತ್ರಿಕೋನಾಕೃತಿಯಲ್ಲಿದ್ದು ಉತ್ತರದಲ್ಲಿ ಅಗಲವಾಗಿದ್ದು ದಕ್ಷಿಣದ ಕಡೆಗೆ ಕಿರಿದಾಗಿದೆ.
4. ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ಪೂರ್ವದಲಿ ಬಂಗಾಳಕೊಲ್ಲಿ & ದಕ್ಷಿಣದಲ್ಲಿ ಹಿಂದೂಮಹಾಸಾಗರವನ್ನು ಹೊಂದಿದೆ.

7. ಉತ್ತರದ ಮೈದಾನವನ್ನು ಸಂಚಯನ ಮೈದಾನವೆಂದು ಕರೆಯುತ್ತಾರೆ. ಏಕೆ? ಅಥವಾ ಉತ್ತರದ ಮೈದಾನ ಪ್ರದೇಶಗಳು ಹೇಗೆ ರಚಿತವಾಗಿವೆ?
  ಉತ್ತರ ಭಾರತದ ಮೈದಾನಗಳು ಹಿಮಾಲಯದಿಂದ ತುಂಬಿ ಹರಿಯುವ ನದಿಗಳು ಹೊತ್ತು ತಂದು ಹಾಕಿದ ಮೆಕ್ಕಲು ಮಣ್ಣಿನಿಂದ ನಿರ್ಮಿತವಾಗಿರುವದರಿಂದ ಇದನ್ನು ಸಂಚಯನ
ಮೈದಾನವೆಂದು ಕರೆಯುತ್ತಾರೆ.

8. ಭಾರತದ ವಾಯುಗುಣದ ಮೇಲೆ ಹಿಮಾಲಯ ಪರ್ವತಗಳು ಹೇಗೆ ಪ್ರಭಾವ ಬೀರುತ್ತದೆ?
  ಹಿಮಾಲಯ ಪರ್ವತಗಳು ಮಧ್ಯ ಏಶಿಯಾದಿಂದ ಬೀಸುವ ಶೀತ ಮಾರುತಗಳನ್ನುತಡೆಗಟ್ಟುತ್ತವೆ. ನೈರುತ್ಯ ಮಾರುತಗಳನ್ನು ತಡೆಗಟ್ಟಿ ಹೆಚ್ಚು ಮಳೆ ಸುರಿಯುವಂತೆ ಮಾಡುತ್ತದೆ.

9. ಪೂರ್ವ & ಪಶ್ಚಿಮ ಘಟ್ಟಗಳ ವ್ಯತ್ಯಾಸವನ್ನು ತಿಳಿಸಿ.
ಪೂರ್ವ ಘಟ್ಟಗಳು
• ಪೂರ್ವ ಘಟ್ಟಗಳು ಹೆಚ್ಚು ಎತ್ತರವಾಗಿಲ್ಲ. ಮತ್ತು ನಿರಂತರವಾಗಿಲ್ಲ.
• ಈ ಘಟ್ಟಗಳು ನದಿ ಕಣಿವೆಗಳಿಂದ
ಅಲ್ಲಲ್ಲಿ ಪ್ರತ್ಯೇಕಿಸಲ್ಪಟ್ಟಿವೆ. ಸಮುದ್ರದಿಂದ ದೂರದಲ್ಲಿ ಹರಡಿವೆ.
• ವಿಶಾಲವಾದ ನದಿಮುಖಜ ಭೂಮಿಯನ್ನು ಒಳಗೊಂಡಿವೆ.
ಪಶ್ಚಿಮ ಘಟ್ಟಗಳು
• ಪಶ್ಚಿಮ ಘಟ್ಟಗಳು ಅತ್ಯಂತ ಹೆಚು ್ಚಎತ್ತರವಾಗಿವೆ. ಮತ್ತು ನಿರಂತರವಾಗಿವೆ.
• ಇವು ಕರಾವಳಿಗೆ ಹೊಂದಿಕೊಂಡು ತುಂಬಾ ಕಡಿದಾಗಿವೆ.
• ಅನೇಕ ಜಲವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಸೃಷ್ಟಿಸಿವೆ.

10. ಪಶ್ಚಿಮ ಕರಾವಳಿ ಮತ್ತು ಪೂರ್ವ ಕರಾವಳಿಗೂ ಇರುವ  ವ್ಯತ್ಯಾಸವೇನು?
        ಪಶ್ಚಿಮ ಕರಾವಳಿ
• ಪಶ್ಚಿಮ ಕರಾವಳಿಯು ಅರಬ್ಬೀ ಸಮುದ್ರ ಮತ್ತು ಪಶ್ಚಿಮ ಘಟ್ಟಗಳ ನಡುವೆ
• ಗುಜರಾತಿನ ಕಛ್‍ನಿಂದ ಕನ್ಯಾಕುಮಾರಿಯವರೆಗೆ ಹಬ್ಬಿದೆ.
• ಇದು ಇಕ್ಕಟ್ಟಾಗಿದ್ದು ಸಮುದ್ರಕ್ಕೆ ಹೊಂದಿಕೊಂಡಿದೆ.

ಪೂರ್ವ ಕರಾವಳಿ
• ಪೂರ್ವ ಕರಾವಳಿಯು ಪೂರ್ವ ಘಟ್ಟ ಹಾಗೂ ಬಂಗಾಳಕೊಲ್ಲಿ ನಡುವೆ ಕನ್ಯಾಕುಮಾರಿ ಯಿಂದ ಉತ್ತರದಲ್ಲಿ ಗಂಗಾನದಿ ಮುಖಜ ಭೂಮಿಯವರೆಗೆ ಹಬ್ಬಿದೆ.
• ಇದು ಈ ಮೈದಾನವು ಹೆಚ್ಚು ಅಗಲ & ಒಂದೇ ರೀತಿ ಸಮತಟ್ಟಾಗಿದೆ

ಅಧ್ಯಾಯ 3. ಭಾರತದ ವಾಯುಗುಣದ ಋತುಮಾನಗಳು ಮತ್ತು ಲಕ್ಷಣಗಳು (GEO)

ಮುಖ್ಯಾಂಶಗಳು:
• ದೇಶದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ಪ್ರದೇಶ ರಾಜಸ್ತಾನದ ಗಂಗಾನಗರ (52’ಸೆಂ) ಆಗಿದೆ.
• ಅತಿ ಹೆಚ್ಚು ಮಳೆ ಬೀಳುವ ಋತುಮಾನ ನೈರುತ್ಯ ಮಾನ್ಸೂನ್ ಕಾಲ ಆಗಿದೆ.
• ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ರಾಜಸ್ತಾನದ ರೂಯ್ಲಿ. (8.3 ಸೆಂ.ಮೀ.)
• ಭಾರತದಲ್ಲಿಯೇ ಅತಿ ಹೆಚ್ಚು ಮಳೆಯಾಗುವ ಪ್ರದೇಶ ಮೇಘಾಲಯದ ಮಾಸಿನರಾಮ
• ಭಾರತದ ವ್ಯವಸಾಯವನ್ನು ಮಾನ್ಸೂನ್ ಮಳೆಯ ಜೊತೆಯಲ್ಲಿ ಆಡುವ ಜೂಜಾಟ ಎಂದು ಕರೆಯುತ್ತಾರೆ.
• ಭಾರತದ ವಾಯುಗುಣವನ್ನು ವಾರ್ಷಿಕವಾಗಿ 4 ಋತುಮಾನಗಳನ್ನಾಗಿ ವಿಂಗಡಿಸಲಾಗಿದೆ.
• ಭಾರತದಲ್ಲಿ ನೈರುತ್ಯ ಮನ್ಸೂನ್ ಎಂದರೆ ಮಳೆಗಾಲ ಎಂದರ್ಥ.

8. ಅಕ್ಟೋಬರ್ ತಿಂಗಳಲ್ಲಿ ಉಷ್ಣಾಂಶವು ಉತ್ತರಾರ್ದs ಗೋಳದಲ್ಲಿ ಕಡಿಮೆಯಾಗಲು ಕಾರಣ -
   ಸೂರ್ಯನ ಕಿರಣಗಳು ದಕ್ಷಿಣಾರ್ಧ ಗೋಳದ ಮೇಲೆ ಲಂಬವಾಗಿ ಬೀಳುತ್ತವೆ ಅಥವಾ ಸೂರ್ಯನ ಕಿರಣಗಳು ಉತ್ತರಾರ್ಧ ಗೋಳದ ಮೇಲೆ ಓರೆಯಾಗಿ ಬೀಳುತ್ತವೆ.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಭಾರತವು ಯಾವ ಬಗೆಯ ವಾಯುಗುಣವನ್ನು ಹೊಂದಿದೆ?
ಭಾರತವು ಉಷ್ಣವಲಯದ ಮಾನ್ಸೂನ್ ಮಾದರಿಯ ವಾಯುಗುಣವನ್ನು ಹೊಂದಿದೆ.

2. ಮಾನ್ಸೂನ್ ಮಾರುತ ಎಂದರೇನು?
ಮಾನ್ಸೂನ್ ಎಂಬ ಪದವು ಅರಬ್ಬಿ ಭಾಷೆಯ ಮೌಸಿಮ್ ಎಂಬ ಪದದಿಂದ ಬಂದಿದೆ.ಇದು ಋತು ಅಥವಾ ಕಾಲ ಎಂ ದರ್ಥ ಕೊಡುತ್ತದೆ.

3. ಯಾವ ಋತುವನ್ನು ಸಾಮಾನ್ಯವಾಗಿ ಮಳೆಗಾಲವೆಂದು ಕರೆಯುವರು?
ನೈರುತ್ಯ ಮಾನ್ಸೂನ್ ಮಾರುತಗಳನ್ನು ಸಾಮಾನ್ಯವಾಗಿ ಮಳೆಗಾಲವೆಂದು ಕರೆಯುವರು.
4. ಭಾರತದ ವಾಯುಗುಣದ ಮೇಲೆ ಪ್ರಭಾವ ಬೀರುವ ಅಂಶಗಳಾವವು?
• ಅಕ್ಷಾಂಶ, ಸಮುದ್ರ ಮಟ್ಟದಿಂದ ಇರುವ ಎತ್ತರ, ಸಾಗರಗಳಿಂದ ಇರುವ ದೂರ,
• ಮಾರುತಗಳು ಬೀಸುವ ದಿಕ್ಕು, ಪರ್ವತ ಸರಣಿಗಳು ಹಬ್ಬಿರುವ ರೀತಿ, ಸಾಗರ ಪ್ರವಾಹಗಳು

5. ಭಾರತದ ವ್ಯವಸಾಯವು ‘ಮಾನ್ಸೂನ್ ಮಾರುತಗಳೊಡನೆ ಆಡುವ ಜೂಜಾಟವಾಗಿದೆ’ ಚರ್ಚಿಸಿ
• ಭಾರತದ ಜನತೆಯ ಪ್ರಧಾನ ಉದ್ಯೋಗವು ವ್ಯವಸಾಯವಾಗಿರುವದರಿಂದ ನೈಋತ್ಯ
• ಮಾನ್ಸೂನ್ ಮಾರುತಗಳು ಒಂದು ವಿಧದಲ್ಲಿ ದೇಶದ ವ್ಯವಸಾಯವನ್ನು ನಿಯಂತ್ರಿಸುತ್ತವೆ.
• ಈ ಮಳೆಯು ವಿಫಲವಾದರೆ ಬರಗಾಲ ಬರುವದು.
• ಅತಿ ಹೆಚ್ಚಾದಾಗ ಪ್ರವಾಹ ಉಂಟಾಗಿ ಪ್ರಾಣಹಾನಿ ಮತ್ತು ಆಸ್ತಿಗಳಿಗೆ ಹಾನಿ ಉಂಟಾಗುತ್ತದೆ.
• ಆದ್ದರಿಂದ ಭಾರತದ ವ್ಯವಸಾಯವನ್ನು ಮಾನ್ಸೂನ್
    ಮಳೆಯೊಡನೆ ಆಡುವ ಜೂಜಾಟ ಎಂದು ಕರೆಯುತ್ತಾರೆ.

6. ನೈರುತ್ಯ ಮಾನ್ಸೂನ್ ಮಾರುತಗಳು ಅಕ್ಟೋಬರ್ ತಿಂಗಳಿನ ಆರಂಭದೊಡನೆ ಹಿಂದಿರುಗಲು ಪ್ರಾರಂಭಿಸುತ್ತವೆ ಕಾರಣ ಕೊಡಿ.
  ಏಕೆಂದರೆ ಭಾರತದ ಒಳನಾಡಿನ ಉಷ್ಣಾಂಶ ಕಡಿಮೆಯಾಗಿ ಒತ್ತಡ  ಹೆಚ್ಚಾಗುತ್ತಾ ಹೋಗುವದರಿಂದ ಮಾನ್ಸೂನ್ ಮಾರುತಗಳು ಹಿಂದಿರುಗಲು ಪ್ರಾರಂಭಿಸುತ್ತವೆ.

7. ಮಾವಿನ ಹೊಯ್ಲು ಎಂದರೇನು?
• ಬೇಸಿಗೆಯ ಅವಧಿಯಲ್ಲಿ ಸ್ಥಳೀಯ ಉಷ್ಣಾಂಶ ಮತ್ತು ಪ್ರಚಲನ ಪ್ರವಾಹಗಳಿಂದ ಎಪ್ರೀಲ್ ಹಾಗೂ ಮೇ ತಿಂಗಳಲ್ಲಿ ಅಲ್ಲಲ್ಲಿ ಮಳೆಯಾಗುತ್ತದೆ.
• ಈ ಮಳೆಯನ್ನು ಪಶ್ಚಿಮ ಬಂಗಾಳದಲ್ಲಿ ಕಾಲಬೈಸಾಕಿ, ದಕ್ಷಿಣ
ಭಾರತದಲ್ಲಿ ಕಾಫ

ಿ ತುಂತುರು ಹಾಗೂ ಮಾವಿನ ಹೊಯ್ಲು ಎಂದು ಕರೆಯುತ್ತಾರೆ.

8. ಭಾರತವನ್ನು ಪ್ರವೇಶಿಸುವ ನೈರುತ್ಯ ಮಾನ್‍ಸೂನ್ ಮಾರುತಗಳ ಎರಡು ಕವಲುಗಳು ಯಾವುವು?
ಅವುಗಳೆಂದರೆ 1. ಅರಬ್ಬಿ ಸಮುದ್ರ ಶಾಖೆ, 2. ಬಂಗಾಳಕೊಲ್ಲಿ ಶಾಖೆ

ಅಧ್ಯಾಯ 4. ಭಾರತದ ಮಣ್ಣುಗಳು (GEO)

ಮುಖ್ಯಾಂಶಗಳು:
• ನದಿಗಳು ಪರ್ವತ ಪ್ರದೇಶದಿಂದ ತಂದು ಸಂಚಯಿಸಿರುವ ಮಣ್ಣಿಗೆ ಮೆಕ್ಕಲು ಮಣ್ಣು ಎಂದು ಹೆಸರು.
• ಕಪ್ಪು ಮಣ್ಣಿನ ಪ್ರದೇಶವನ್ನು ಡೆಕ್ಕನ್ ಟ್ರಾಪ್ ಎಂದು ಸಹ ಕರೆಯುವರು.
• ರಾಜಸ್ತಾನದಲ್ಲಿ ಮರಭೂಮಿ ಮಣ್ಣು ಹೆಚ್ಚಾಗಿ ಕಂಡುಬರುವದು.
• ಜೋಳ ಬೆಳೆಯಲು ಕಪ್ಪು ಮಣ್ಣು ಸೂಕ್ತವಾಗಿದೆ.
• ರಾಗಿ & ಎಣ್ಣೆ ಕಾಳು ಬೆಳೆಯಲು ಕೆಂಪು ಮಣ್ಣು ಸೂಕ್ತವಾಗಿದೆ.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಕಪ್ಪು ಮಣ್ಣು ಯಾವ ಯಾವ ಬೆಳೆಗಳಿಗೆ ಹೆಚ್ಚು ಸೂಕ್ತವಾಗಿದೆ?
• ಕಪ್ಪು ಮಣ್ಣು - ಹತ್ತಿ, ಜೋಳ, ಗೋದಿ, ಈರುಳ್ಳಿ,
ಮೆಣಸಿನಕಾಯಿ, ಹೊಗೆಸೊಪ್ಪು,
• ಎಣ್ಣೆಕಾಳುಗಳು, ನಿಂಬೆ & ದ್ರಾಕ್ಷಿ ಮುಂತಾದ ಬೆಳೆಗಳಿಗೆ ಹೆಚ್ಚು ಸೂಕ್ತವಾಗಿದೆ.

2. ಭಾರತದಲ್ಲಿ ಕಂಡು ಬರುವ ಮಣ್ಣಿನ ಮುಖ್ಯ ಪ್ರಕಾರಗಳಾವವು?
ಭಾರತದಲ್ಲಿ ಕಂಡು ಬರುವ ಮಣ್ಣನ್ನು ಆರು ಪ್ರಮುಖ ವಿಧಗಳಾಗಿ ವಿಂಗಡಿಸಲಾಗಿದೆ.
ಅವುಗಳೆಂದರೆ – 1. ಮೆಕ್ಕಲುಮಣ್ಣು, 2. ಕಪ್ಪುಮಣ್ಣು,
3. ಕೆಂಪುಮಣ್ಣು, 4. ಜಂಬಿಟ್ಟಿಗೆ ಮಣ್ಣು,
5. ಮರು¨Àೂsಮಿ ಮಣು,್ಣ 6. ಪರ್ವತ ಮಣ್ಣು.

3. ಉತ್ತರ ಮೈದಾನ ಪ್ರದೇಶದಲ್ಲಿ ಯಾವ ಮಣ್ಣು ಕಂಡು ಬರುತ್ತದೆ?
ಉತ್ತರ ಮೈದಾನ ಪ್ರದೇಶದಲ್ಲಿ ಮೆಕ್ಕಲು ಮಣ್ಣು ಕಂಡು ಬರುತ್ತದೆ.

4. ಮಣ್ಣಿನ ಸಂರಕ್ಷಣೆ ಎಂದರೇನು? ಅದರ ವಿಧಾನಗಳನ್ನು ಪಟ್ಟಿ ಮಾಡಿರಿ.
   ಮಣ್ಣಿನ ಸವೆತವನ್ನು ತಡೆಗಟ್ಟುವುದು ಹಾಗೂ ಅದರ
ಫಲವತ್ತತೆಯನ್ನು ಕಾಪಾಡುವುದೇ ‘ಮಣ್ಣಿನ ಸಂರಕ್ಷಣೆ’ ಎನ್ನುವರು. ಮಣ್ಣಿನ ಸವೆತವನ್ನು ತಡೆಗಟ್ಟಲು ಹಲವಾರು ವಿಧಾನಗಳಿವೆ. ಅವುಗಳಲ್ಲಿ
ಮುಖ್ಯವಾದವುಗಳೆಂದರೆ –
• ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದು.
• ಅಡ್ಡ ಬದುಗಳನ್ನು ನಿರ್ಮಿಸುವದು.
• ವೈಜ್ಞಾನಿಕ ಬೇಸಾಯ ಕ್ರಮಗಳನ್ನು ಅನುಸರಿಸುವದು.
• ಅರಣ್ಯ ನಾಶವನ್ನು ತಡೆಗಟ್ಟಿ ಕಾಡನ್ನು ಬೆಳೆಸುವದು.
• ನೀರಿನ ಸೂಕ್ತ ಬಳಕೆ ಮಾಡುವದು.
• ಚೆಕ್ ಡ್ಯಾಮ್‍ಗಳ ನಿರ್ಮಾಣ.

5. ಮಣ್ಣಿನ ಸವೆತಕ್ಕೆ ಕಾರಣಗಳೇನು?
• ಅರಣ್ಯಗಳ ನಾಶ, 2. ಸಾಕು ಪ್ರಾಣಿಗಳನ್ನು ಮೇಯಿಸುವದು,
• ಅವೈಜ್ಞಾನಿಕ ಬೇಸಾಯ, 4. ಅಧಿಕ ನೀರಾವರಿ ಬಳಕೆ.

6. ಮೆಕ್ಕಲು ಮಣ್ಣಿನ ಗುಣಲಕ್ಷಣಗಳನ್ನು ತಿಳಿಸಿ.
• ಸಮಾರು 7.7 ದಶಲಕ್ಷ ಚ.ಕಿ.ಮೀ. ಪ್ರದೇಶಗಳಲ್ಲಿ ಹರಡಿದೆ.
• ನದಿಗಳು ಪರ್ವತ ಪ್ರದೇಶಗಳಿಂದ ಹೊತ್ತುತಂದು ಸಂಚಯಿಸಿರುವ ಮಣ್ಣಿನಿಂದ ರಚಿತವಾಗಿದೆ.
• ಈ ಮಣ್ಣಿನಲ್ಲಿ ¥ಇಂmಂಚಿμi ಮತ್ತು ಸುಣ್ಣ ಹೆಚ್ಚಾಗಿರುತ್ತದೆ.
• ಜೈವಿಕಾಂಶ & ಸಾರಜನಕ ಕಡಿಮೆ ಪ್ರಮಾಣದಲ್ಲಿರುತ್ತವೆ.
• 5 ಇಲ್ಲಿ ಬೆಳೆಯುವ ಪ್ರಮುಖ ಬೆಳೆಗಳೆಂದರೆ ಗೋದಿ, ಭತ್ತ, ಕಬ್ಬು & ಸಣಬು.

7. ಮಣ್ಣಿನ ಸವೆತ ಎಂದರೇನು? ಅದರಿಂದ ಉಂಟಾಗುವ ಸಮಸ್ಯೆಗಳು ಅಥವಾ ಪರಿಣಾಮಗಳನ್ನು ಪಟ್ಟಿಮಾಡಿ.
    ಭೂಮೇಲ್ಮೈಯಲ್ಲಿ ಕಂಡು ಬರುವ ಸಡಿಲವಾದ ಪದರವು ವಿವಿಧ ಪ್ರಾಕೃತಿಕ ಶಕ್ತಿಗಳಿಂದ ಸ್ಥಳಾಂತರ ಹೊಂದುವ ಕ್ರಿಯೆಯನ್ನೇ ಮಣ್ಣಿನ ಸವೆತ ಅಥವಾ ಭೂಸವೆತ ಎಂದು ಕರೆಯುತ್ತಾರೆ.
ಮಣ್ಣಿನ ಸವೆತದಿಂದ ಉಂಟಾಗುವ ಪರಿಣಾಮಗಳು.
• ನದಿಗಳಲ್ಲಿ ಹೂಳು ತುಂಬಿ ಪ್ರವಾಹ ಉಂಟಾಗುತ್ತದೆ.
• ನದಿಗಳು ತಮ್ಮ ದಿಕ್ಕನ್ನು ಬದಲಾಯಿಸಿ ಆಸ್ತಿ ಪಾಸ್ತಿಗೆ ಹಾನಿ ಉಂಟು ಮಾಡುತ್ತವೆ.
• ಜಲಾಶಯ ಅಥವಾ ಕರೆಗಳಲ್ಲಿ ಹೂಳು ತುಂಬುವದರಿಂದ ನೀರಿನ ಸಂಗ್ರಹಣಾ ಸಾಮಥ್ರ್ಯ ಕಡಿಮೆಯಾಗುವದು.
• ಭೂಸವೆತದಿಂದ ಭೂಮಿಯಲ್ಲಿ ಇಂಗುವ ನೀರಿನ ಪ್ರಮಾಣ ಕಡಿಮೆಯಾಗುವದು.
• ಭೂಸವೆತದಿಂದ ಭೂಮಿಯ ಫಲವತ್ತತೆ ಕಡಿಮೆಯಾಗುವದು.

8. ಕಪ್ಪು ಮಣ್ಣಿನ ಗುಣಲಕ್ಷಣಗಳನ್ನು ತಿಳಿಸಿರಿ.
• ಈ ಮಣ್ಣು ಹತ್ತಿ ಬೆಳೆಗೆ ಹೆಚ್ಚು ಉಪಯುಕ್ತವಾದುದು.
• ಈ ಮಣ್ಣು ಅಗ್ನಿಶಿಲೆಗಳ ಶಿಥಿಲಿಕರಣದಿಂದ ಉತ್ಪತ್ತಿಯಾಗಿದೆ.
• ಇದರಲ್ಲಿ ಜೇಡಿಮಣ್ಣಿನ ಕಣಗಳು ಹೆಚ್ಚಾಗಿ ಕಂಡುಬರುತ್ತವೆ.
• ಮಣ್ಣು ಫಲವತ್ತಾಗಿದ್ದು ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿದೆ.
• ಈ ಮಣ್ಣು ಕಬ್ಬಿಣ, ಸುಣ್ಣ ಹಾಗೂ ಮೆಗ್ನೀಷಿಯಂ ಕಾರ್ಬೋನೇಟ್‍ಗಳನ್ನು ಅಧಿಕ ಪ್ರಮಾಣದಲ್ಲಿ ಒಳಗೊಂಡಿದೆ.
• ಬೆಳೆಯುವ ಪ್ರಮುಖ ಬೆಳೆಗಳೆಂದರೆ ಹತ್ತಿ, ಜೋಳ, ಗೋಧಿ, ಈರುಳ್ಳಿ, ಮೆಣಸಿನಕಾಯಿ.

9. ಕೆಂಪು ಮಣ್ಣಿನ ಗುಣಲಕ್ಷಣಗಳನ್ನು ತಿಳಿಸಿ.
• ಈ ಮಣ್ಣು ಸ್ಪಟಿಕ ಶಿಲೆಗಳ ಶಿಥಲೀಕರಣದಿಂದ ಉಂಟಾಗುತ್ತದೆ.
• ಈ ಮಣ್ಣಿನಲ್ಲಿ ಕಬ್ಬಿಣದ ಅಂಶವು ಕಬ್ಬಿಣದ ಆಕ್ಸೈಡ್ ಆಗಿ ಪರಿವರ್ತನೆ ಹೊಂದುವದರಿಂದ
• ಇದು ಕೆಂಪು ಬಣ್ಣವನ್ನು ಹೊಂದಿದೆ.
• ಜೈವಿಕಾಂಶ, ರಂಜಕ ಮತ್ತು ಸುಣ್ಣದ ಕೊರತೆ ಈ ಮಣ್ಣಿನಲ್ಲಿದೆ.
• ಇಲ್ಲಿ ಬೆಳೆಯುವ ಪ್ರಮುಖ ಬೆಳೆಗಳೆಂದರೆ ಹೊಗೆಸೊಪ್ಪು, ಎಣ್ಣೆಕಾಳು, ಕಬ್ಬು, ಹತ್ತಿ.

10. ಹಿಮಾಲಯ ಪರ್ವತಗಳಲ್ಲಿ ಯಾವ ಬಗೆಯ ಮಣ್ಣು ಕಂಡು
ಬರುವುದು?
   ಹಿಮಾಲಯ ಪರ್ವತಗಳಲ್ಲಿ ಕೊಳೆತ ಜೈವಿಕಾಂಶಗಳನ್ನೊಳಗೊಂಡ ಮಣ್ಣು ಕಂಡು ಬರುವದು

ಅಧ್ಯಾಯ 5. ಭಾರತದ ಅರಣ್ಯಗಳು (GEO)

ಮುಖ್ಯಾಂಶಗಳು:
• ಅಸ್ಸಾಂ, ಮೇಘಾಲಯಗಳಲ್ಲಿ ಕಂಡುಬರುವ ಅರಣ್ಯದ ಪ್ರಕಾರವು ನಿತ್ಯ ಹರಿದ್ವರ್ಣ ಅರಣ್ಯ ಆಗಿದೆ.
• ಹಿಮಾಲಯದಲ್ಲಿ ಅಲ್ಫೈನ್ ಅರಣ್ಯಗಳು ಕಂಡುಬರುತ್ತವೆ.
• ಗಂಗಾನದಿ ಮುಖಜ ಭೂಮಿಯನ್ನು ಸುಂದರಬನ ಎಂದು ಕರೆಯುತ್ತಾರೆ.
• ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವು ಕರ್ನಾಟಕ ರಾಜ್ಯದಲ್ಲಿದೆ.
• ಸುಂದರಬನ್ ಎಂದು ಕರೆಯಲು ಸುಂದರಿ ಮರಗಳು ಬೆಳೆಯಲು ಕಾರಣವಾಗಿದೆ.
• ದೇಶದಲ್ಲಿ ಅರಣ್ಯ ಪ್ರದೇಶದ ಹಂಚಿಕೆಯಲ್ಲಿ ಮಧ್ಯಪ್ರದೇಶ ರಾಜ್ಯ ಪ್ರಥಮ ಸ್ಥಾನದಲ್ಲಿದ್ದರೆ,
• ಹರಿಯಾಣ ರಾಜ್ಯವು ಕೊನೆ ಸ್ಥಾನದಲ್ಲಿದ್ದು, ಕರ್ನಾಟಕವು 13ನೇ ಸ್ಥಾನದಲ್ಲಿದೆ.
• ಭಾರತದಲ್ಲಿ ಇಂದು 523 ವನ್ಯಜೀವಿ ಧಾಮಗಳಿವೆ.
• ಭಾರತದಲ್ಲಿ ಸ್ಥಾಪಿತವಾದ ಮೊದಲ ರಾಷ್ಟ್ರೀಯ ಉದ್ಯಾನವನವೆಂದರೆ ಉತ್ತರಾಂಚಲದ ಜಿಮ್ ಕಾರ್ಬೆಟ್.
• ಜೀವವ್ಯವಸ್ಥೆಯನ್ನು ಕಾಪಾಡಲು ದೇಶದಲ್ಲಿ 18 ಜೈವಿಕ ವಲಯಗಳನ್ನು ಸಂರಕ್ಷಿಸಲಾಗಿದೆ.
• ದೇಶದಲ್ಲಿ ಪ್ರಥಮ ಜೈವಿಕ ಸಂರಕ್ಷಣಾ ವಲಯ ನೀಲಗಿರಿ ಸಂರಕ್ಷಣಾ ವಲಯ.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಭಾರತವು ಹೊಂದ

ಿರುವ ಅರಣ್ಯ ಪ್ರದೇಶಗ¼ಇμಂಂಔ?
ಭಾರತವು 2009 ರ ಅಂದಾಜಿನಂತೆ 6.9 ಲಕ್ಷ ಚ.ಕಿ.ಮೀ.(69.0 ದ.ಲ.ಹೇ.) ಅಂದರೇ ಭೌಗೋಳಿಕ ಕ್ಷೇತ್ರದ ಶೇ. 21.02  ಭೂಭಾಗವು ಅರಣ್ಯಗಳಿಂದ ಕೂಡಿರುವುದಾಗಿದೆ.

2. ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳನ್ನು ಹೆಸರಿಸಿ.
ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳು : ಬಂಡಿಪುರ, ನಾಗರಹೊಳೆ, ಬನ್ನೇರುಘಟ್ಟ.

3. ಸ್ವಾಭಾವಿಕ ಸಸ್ಯವರ್ಗ ಎಂದರೇನು?
ಒಂದು ಪ್ರದೇಶದಲ್ಲಿ ಪ್ರಕೃತಿದತ್ತವಾಗಿ ಬೆಳೆದಿರುವ ಎಲ್ಲಾ ಬಗೆಯ ಸಸ್ಯ ಸಮೂಹವನ್ನು ಅರಣ್ಯಗಳು ಅಥವಾ ಸ್ವಾಭಾವಿಕ ಸಸ್ಯವರ್ಗವೆಂದು ಕರೆಯುವರು.

4. ಭಾರತದ ಸಸ್ಯವರ್ಗವನ್ನು ಎಷ್ಟು ವಿಧಗಳಾಗಿ ವಿಂಗಡಿಸಲಾಗಿದೆ? ಅವು ಯಾವುವು?
• ಭಾರತದ ಸಸ್ಯವರ್ಗವನ್ನು ಆರು ವಿಧಗಳಾಗಿ ವಿಂಗಡಿಸಬಹುದು.
• 1. ಉಷ್ಟವಲಯದ ನಿತ್ಯ ಹರಿದ್ವರ್ಣ ಕಾಡುಗಳು
2. ಉಷ್ಟವಲಯದ ಎಲೆ ಉದುರುವಕಾಡುಗಳು
3. ಉಷ್ಟವಲಯದ ಮುಳ್ಳುಗಿಡಗಳು ಮತ್ತು ಪೊದೆಗಳು
4. ಮರುಭೂಮಿ ಸಸ್ಯವರ್ಗ
5. ಮ್ಯಾಂಗ್ರೋವ್ ಕಾಡುಗಳು
6. ಹಿಮಾಲಯ ಸಸ್ಯವರ್ಗ

5. ಜೈವಿಕ ವೈವಿದ್ಯತೆ ಎಂದರೇನು?
ಭಾರತದಲ್ಲಿ ವೈವಿಧ್ಯಮಯವಾದ ಭೂಸ್ವರೂಪ, ವಾಯುಗುಣ ಮತ್ತು ಸ್ವಾಭಾವಿಕ ಸಸ್ಯವರ್ಗಕ್ಕೆ ಅನುಗುಣವಾಗಿ ಇಲ್ಲಿನ ಪ್ರಾಣಿವರ್ಗ ಮತ್ತು ಪಕ್ಷಿಸಂಕುಲಗಳೂ ವೈವಿಧ್ಯಮಯವಾಗಿವೆ.
ಆದ್ದರಿಂದ ಇದನ್ನು ಜೈವಿಕ ವೈವಿದ್ಯತೆ ಎನ್ನುತ್ತಾರೆ.

6. ದೇಶದಲ್ಲಿ ಅರಣ್ಯ ಸಂರಕ್ಷಣೆಗೆ ನಿಮ್ಮ ಸಲಹೆಯೇನು? ಅಥವಾ
ಅರಣ್ಯ ಸಂರಕ್ಷಣೆ ಎಂದರೇನು? ಸಂರಕ್ಷಣಾ ವಿಧಾನಗಳನ್ನು ತಿಳಿಸಿ.
     ಅರಣ್ಯಗಳನ್ನು ಮಾನವ, ಪ್ರಾಣಿಗಳಿಂದ ಹಾಗೂ ನೈಸರ್ಗಿಕ ವಿಪತ್ತುಗಳಿಂದ ಕಾಪಾಡುವದನ್ನೇ ಅರಣ್ಯ ಸಂರಕ್ಷಣೆ ಎಂದು ಕರೆಯುವರು.
ಅರಣ್ಯ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳು
• ಅರಣ್ಯದ ಮರಗಳಿಗೆ ತಗುಲುವ ರೋಗಗಳನ್ನು ನಿಯಂತ್ರಿಸುವದು.
• ಸಸಿಗಳನ್ನು ನೆಡುವದು, ಬೀಜಗಳನ್ನು ಹರಡುವದು.
• ಕಾನೂನು ಬಾಹಿರವಾಗಿ ಮರ ಕಡಿಯುವದನ್ನು ನಿಯಂತ್ರಿಸುವದು.
• ಸಾರ್ವಜನಿಕರನ್ನು ಮರ ನೆಡಲು ಪ್ರೋತ್ಸಾಹಿಸುವದು.
• ಅರಣ್ಯಗಳಲ್ಲಿ ಸಾಕುಪ್ರಾಣಿಗಳನ್ನು ಮೇಯಿಸುವದನ್ನು ನಿಯಂತ್ರಿಸುವದು.
• ಅರಣ್ಯಗಳ ಪ್ರಾಮುಖ್ಯತೆಯ ಬಗ್ಗೆ ತಿಳುವಳಿಕೆ ನೀಡಿ ರಕ್ಷಣೆಗೆ ಪ್ರೇರೇಪಿಸುವದು.

7. ಭಾರತದಲ್ಲಿ ಎಲೆ ಉದುರುವ ಅರಣ್ಯಗಳ ಲಕ್ಷಣ ಮತ್ತು
ಹಂಚಿಕೆಯನ್ನು ತಿಳಿಸಿ.
• ವಾರ್ಷಿಕ ಸರಾಸರಿ 75 ರಿಂದ 250 ಸೆಂ.ಮೀ. ಮಳೆ ಬೀಳುವ ಕಡೆಗಳಲ್ಲಿ ಈ ಅರಣ್ಯಗಳು ಕಂಡು ಬರುತ್ತವೆ.
• ಈ ಕಾಡುಗಳಲ್ಲಿ ಮರಗಳು ವಿರಳವಾಗಿಯೂ, ಕಡಿಮೆ ಎತ್ತರವಾಗಿಯೂ ಬೆಳೆದಿರುತ್ತವೆ.
• ಬೇಸಿಗೆಯ ಆರಂಭದಲ್ಲಿ ಈ ಮರಗಳ ಎಲೆಗಳು ಉದುರುತ್ತವೆ.
• ಬೆಲೆ ಬಾಳುವ ತೇಗ, ಸಾಲ, ಶ್ರೀಗಂಧ ಮರಗಳು ಹೆಚ್ಚಾಗಿ ಕಂಡುಬರುತ್ತವೆ.
• ಇವು ಪಶ್ಚಿಮ ಘಟ್ಟದ ಪೂರ್ವದ ಇಳಿಜಾರು, ಜಮ್ಮು & ಕಾಶ್ಮೀರ, ಬಂಗಾಳ, ಛತ್ತೀಸಘಡ್,
• ಒರಿಸ್ಸಾ, ಬಿಹಾರ & ಝಾರ್ಖಂಡ್‍ಗಳಲ್ಲಿ ಕಂಡುಬರುತ್ತವೆ.

8. ಭಾರತದಲ್ಲಿ ನಿತ್ಯಹರಿದ್ವರ್ಣ ಕಾಡುಗಳ ಲಕ್ಷಣ ಮತ್ತು ಹಂಚಿಕೆಯನ್ನು ತಿಳಿಸಿ.
• ಈ ಸಸ್ಯವರ್ಗವು ವರ್ಷದಲ್ಲಿ 250 ಸೇಂ.ಮೀ.ಗಿಂತ ಹೆಚ್ಚು ಮಳೆ ಬೀಳುವ ಮತ್ತು 25’ರಿಂದ
• 27’ಸೆ. ಉಷ್ಣಾಂಶವಿರುವ ಪ್ರದೇಶಗಳಲ್ಲಿ ಕಂಡುಬರುತ್ತವೆ.
• ಇಲ್ಲಿನ ಮರಗಳು 60 ಮೀಟರ ಎತ್ತರವಾಗಿ ಬೆಳೆದಿರುತ್ತವೆ.
• ಇಲ್ಲಿನ ಮುಖ್ಯ ಮರಗಳೆಂದರೆ ಎಬೋನಿ, ಮಹಾಗನಿ, ಕರಿಮರ, ಬಿದಿರು ಮತ್ತು ರಬ್ಬರ
• ಭಾರತದಲ್ಲಿ ಈ ಕಾಡುಗಳು ಪಶ್ಚಿಮ ಘಟ್ಟದ ಪಶ್ಚಿಮ ಭಾಗ, ಈಶಾನ್ಯ ಬೆಟ್ಟ ಗುಡ್ಡಗಳಪ್ರದೇಶ, ಅಂಡಮಾನ್ ಮತ್ತು ನಿಕೋಬಾರ ದ್ವೀಪಗಲ್ಲಿ ಕಂಡು ಬರುತ್ತವೆ.

8. ಮಾನ್ಸೂನ್ ಕಾಡುಗಳು ಮತ್ತು ಮಾನ್‍ಗ್ರೋವ್ ಕಾಡುಗಳಲ್ಲಿ
ಕಂಡುಬರುವ ವ್ಯತ್ಯಾಸಗಳೇನು?
    ಮಾನ್ಸೂನ್ ಕಾಡುಗಳು 75 ರಿಂದ 250 ಸೆಂ.ಮೀ. ಮಳೆ
    ಬೀಳುವ ಪ್ರದೇಶಗಳಲ್ಲಿ ಕಂಡುಬರುತ್ತವೆ. ಬೇಸಿಗೆ ಆರಂಭದಲ್ಲಿ
    ಈ ಅರಣ್ಯಗಳ ಮರಗಳ ಎಲೆಗಳು ಉದುರುತ್ತವೆ. ಆದರೆ
    ಮ್ಯಾನ್‍ಗ್ರೋವ್ ಅರಣ್ಯಗಳು ತೀರ ಪ್ರದೇಶಗಳ
    ತಗ್ಗುವಲಯಗಳು ಸಮುದ್ರದ ಉಬ್ಬರದ ಕಾಲದಲ್ಲಿ ನೀರಿನಿಂದ
    ಆವರಿಸಲ್ಪಡುತ್ತವೆ. ಈ ಕಾಡುಗಳು ನದಿಮುಖಜ ಮತ್ತು ನದಿ
    ಅಳಿವೆಗಳ ತಗ್ಗು ಪ್ರದೇಶಗಳಲಿ ಕಂಡುಬರುತ್ತವೆ.

10. ಸುಂದರಬನ್ಸ ಎಂದರೇನು?
    ಗಂಗಾನದಿಯ ಮುಖಜಭೂಮಿಯಲ್ಲಿ ಸುಂದರಿ ಮರಗಳು ಅಧಿಕವಾಗಿರುವದರಿಂದ ಈ ಪ್ರದೇಶವನ್ನು ಸುಂದರಬನ್ಸ ಕಾಡುಗಳು ಎಂದು ಕರೆಯುತ್ತಾರೆ.

11. ಅರಣ್ಯಗಳ ಪ್ರಾಮುಖ್ಯತೆಯನ್ನು ತಿಳಿಸಿ.
• ಕೈಗಾರಿಕೆಗಳಿಗೆ ಬೇಕಾದ ಕಚ್ಚಾವಸ್ತುಗಳನ್ನು, ಗಿಡಮೂಲಿಕೆಗಳು, ಪಶುಗಳಿಗೆ ಆಹಾರವನ್ನು ಒದಗಿಸುತ್ತವೆ.
• ಕಾಡುಗಳು ತೇವಾಂಶವನ್ನು ಪೂರೈಸಿ ಉμಂUಂ }Àವನ್ನು ಮಾರ್ಪಡಿಸುತ್ತವೆ.
• ತೇವಾಂಶವುಳ್ಳ ಮಾರುತಗಳನ್ನು ತಡೆದು ಮಳೆ ಬೀಳುವದಕ್ಕೆ ನೆರವಾಗುತ್ತವೆ.
• ಕಾಡುಗಳು ಮಣ್ಣಿನ ಸವಕಳಿಯನ್ನು ತಡೆಗಟ್ಟುತ್ತವೆ. ಹಾಗೂ ಫಲವತ್ತತೆಯನ್ನು ಹೆಚ್ಚಿಸುತ್ತವೆ.
• ಕಾಡುಗಳು ಅನೇಕ ಪ್ರಾಣಿ ಪಕ್ಷಿಗಳಿಗೆ ಆಶ್ರಯ ನೀಡಿವೆ.
• ಕಾಡುಗಳು ಪರಿಸರ ಸಮತೋಲನ ಕಾಯ್ದುಕೊಳ್ಳಲು ಸಹಕರಿಸುತ್ತವೆ.
• ವನ್ಯಧಾಮಗಳನ್ನೊಂದಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತವೆ.
ಅಧ್ಯಾಯ 6. ಜಲ ಸಂಪನ್ಮೂಲಗಳು (GEO)

ಮುಖ್ಯಾಂಶಗಳು:
• ದಾಮೋದರ ನದಿಯನ್ನು ಬಂಗಾಳದ ಕಣ್ಣೀರಿನ ನದಿ ಎಂದು ಕರೆಯುತ್ತಾರೆ.
• ಬಿಹಾರದ ಕಣ್ಣೀರಿನ ನದಿ ಕೋಸಿ ನದಿ.
• ಕರ್ನಾಟಕದ ದೊಡ್ಡ ನೀರಾವರಿ ಯೋಜನೆ ಕೃಷ್ಣಾ ಮೇಲ್ದಂಡೆ ಯೋಜನೆ.
• ಕಾವೇರಿ ನದಿಗೆ ಶಿವನಸಮುದ್ರ ಎಂಬಲ್ಲಿ ವಿದ್ಯುಚ್ಛಕ್ತಿ ಯೋಜನೆಯನ್ನು ನಿರ್ಮಿಸಲಾಗಿದೆ.
• ಹಿರಾಕುಡ್ ಯೋಜನೆಯನ್ನು ಮಹಾನದಿಗೆ ನಿರ್ಮಿಸಲಾಗಿದೆ.
• ದಾಮೋದರ ನದಿ ಕಣಿವೆ ಯೋಜನೆಯು ಸ್ವತಂತ್ರ ಭಾರತದ ಮೊದಲನೆಯ ವಿವಿದೋದ್ದೇಶನದಿ ಕಣಿವೆ ಯೋಜನೆಯಾಗಿದೆ.
• ಭಾಕ್ರಾ ನಂಗಲ್ ಯೋಜನೆಯು ಭಾರತದಲ್ಲಿಯೇ ಅತ್ಯಂತ ಎತ್ತರವಾದ ವಿವಿದೋದ್ದೇಶ ನದಿ ಕಣಿವೆ ಯೋಜನೆಯಾಗಿದೆ.

• ಭಾಕ್ರಾ ನಂಗಲ್  : ಗೋವಿಂದ ಸಾಗರ : : ತುಂಗಭದ್ರಾ : ಪಂಪಸಾಗರ.
• ಮಹಾನದಿಯನ್ನು ಒರಿಸ್ಸಾದ ಕಣ್ಣೀರಿನ ನದಿ ಎಂದು ಕರೆಯುತ್ತಾರೆ.
• ಹಿರಾಕುಡ್ ಆಣೆಕಟ್ಟು ಭಾರತದಲ್ಲಿಯೇ ಅತ್ಯಂತ ಉದ್ದವಾದ ಆಣೆಕಟ್ಟಾಗಿದೆ.

Post a Comment

0 Comments